ಕಿರು ಪರಿಚಯಗಳು, ದಿನಚರಿಗಳು, ವೀಡಿಯೋಗಳು, ಸಂಭಾಷಣೆಗಳು: ಈ ವಿಭಾಗದಲ್ಲಿರುವ ಪ್ರತಿ ಅಂಶವೂ ನಾವು ಮತ್ತು ನಮ್ಮ ಕೆಲಸದತ್ತ ನಿಮ್ಮನ್ನು ಇನ್ನಷ್ಟು ಹತ್ತಿರಕ್ಕೆ ಸೆಳೆಯುತ್ತದೆ
ನಮ್ಮ ಮೂರು ಕಾರ್ಯಾಚರಣೆಯ ಘಟಕಗಳು (ಕ್ಷೇತ್ರ ಸಂಸ್ಥೆಗಳು, ಲೋಕೋಪಕಾರಿ ಘಟಕ ಮತ್ತು ವಿಶ್ವವಿದ್ಯಾಲಯಗಳು), ನ್ಯಾಯಯುತ, ಸಮಾನ, ಮಾನವೀಯ ಮತ್ತು ಸುಸ್ಥಿರ ಸಮಾಜದ ಸ್ಥಾಪನೆಗಾಗಿ ಕೊಡುಗೆ ನೀಡುವ ಫೌಂಡೇಷನ್ನ ಧ್ಯೇಯಕ್ಕೆ ಉತ್ತೇಜನ ನೀಡಲು ಏಕೀಕೃತ ರೀತಿಯಲ್ಲಿ ಕೆಲಸ ಮಾಡುತ್ತವೆ. ಭಾರತದಾದ್ಯಂತ ಇರುವ ನಮ್ಮ ಜನರು ಮತ್ತು ಪಾಲುದಾರರಿಂದ ನೇರವಾಗಿ ಈ ಮೂರು ಘಟಕಗಳ ಸಂಕಥನಗಳ ಸಂಗ್ರಹವನ್ನು ನಾವು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇವೆ. ವಿಡಿಯೊ, ಚಲಿಸುವ ಚಿತ್ರಗಳು (ಅನಿಮೇಶನ್), ಸಂದರ್ಶನಗಳು ಮತ್ತು ಜರ್ನಲ್ಗಳ ರೂಪದಲ್ಲಿರುವ ಈ ಸಂಕಥನಗಳು, ತಾನು ತೊಡಗಿಸಿಕೊಂಡಿರುವ ವಿವಿಧ ಕ್ಷೇತ್ರಗಳಲ್ಲಿ ಫೌಂಡೇಷನ್ನ ಪಯಣ ಹಾಗೂ ಇದು ಉಂಟು ಮಾಡಿರುವ ಪರಿಣಾಮಕ್ಕೆ ಕನ್ನಡಿ ಹಿಡಿಯುತ್ತವೆ.
ನಕ್ಷತ್ರಗಳು ಸಂಚಿಕೆ 22 | ರಾಮಣ್ಣ, ಮಾಗಡಿ, ರಾಮನಗರ | ಉಮಾಶಂಕರ್ ಪೆರಿಯೋಡ
ರಾಮಣ್ಣನವರು ಕೇವಲ ಮೂರು ತಿಂಗಳುಗಳಲ್ಲಿ ಮಕ್ಕಳು ಇಂಗ್ಲಿಷ್ನಲ್ಲಿ ಸಂಭಾಷಣೆ ನಡೆಸುವಂತೆ ಮಾಡಿದರು. ಇದು ಶಾಲೆಗೆ ಹೆಚ್ಚಿನ ವಿದ್ಯಾರ್ಥಿಗಳನ್ನು ಆಕರ್ಷಿಸಿತು.
ನಕ್ಷತ್ರಗಳು ಸಂಚಿಕೆ 21 | ಸುಧಾ ಜಿ, ನೌಬಾದ್, ಬೀದರ್ | ಉಮಾಶಂಕರ ಪೆರಿಯೋಡಿ
ಸುಧಾ ಜಿ. ಅವರು ಮೂರು ವಿಭಿನ್ನ ಶಾಲೆಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಈ ಪ್ರತಿಯೊಂದು ಶಾಲೆಯು ಒಬ್ಬ ಶಿಕ್ಷಕಿಯಾಗಿ ಅವರ ದೃಷ್ಟಿಕೋನವನ್ನು ತನ್ನದೇ ಆದ ಅನನ್ಯ ರೀತಿಗಳಲ್ಲಿ ರೂಪಿಸಲು ಸಹಾಯ ಮಾಡಿದೆ.
ನಕ್ಷತ್ರಗಳು ಸಂಚಿಕೆ 19 | ಗವಿಕುಮಾರ್ ಕಸ್ತೂರಿ, ಕೊಪ್ಪಳ | ಉಮಾಶಂಕರ ಪೆರಿಯೋಡಿ
ಶಾಲೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದ್ದರೂ ಸಹ, ಗವಿಕುಮಾರ್ ಅವರು ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನೂ ಅಭಿವೃದ್ಧಿಪಡಿಸಿದ ರೀತಿ, ಜಾತಿ ತಾರತಮ್ಯದ ಅಡೆತಡೆಗಳ ವಿರುದ್ಧ ಹೋರಾಡಿದ ಪರಿ ಮತ್ತು ವಿದ್ಯಾರ್ಥಿಗಳಿಗೆ ಶಾಲೆಯನ್ನು ಹೆಚ್ಚು ಆಕರ್ಷಕವಾಗಿ ಹಾಗೂ ಸ್ವಾಗತಾರ್ಹವಾಗಿ ಮಾಡಿದ ಬಗೆಯನ್ನು ಅನ್ವೇಷಿಸಿ.
Nakshatragalu EP 18 | Sriyamsh, Kamatagi, Hungunda Taluk | Umashankar Periodi
From setting up an excellent library in his school to organising unique programmes like stargazing, demonstration of the election process, and “homework with parents” to involve both parents and community members, listen to Sriyamsh Kolar’s story.
ನಕ್ಷತ್ರಗಳು ಸಂಚಿಕೆ 17 | ಆನಂದ್ ಚಿನ್ನಪ್ಪ, ಹಡಗಲಿ ತಾಂಡ, ವಿಜಯಪುರ | ಉಮಾಶಂಕರ ಪೆರಿಯೋಡಿ
ಮಕ್ಕಳನ್ನು ಆಕರ್ಷಿಸಲು ಮತ್ತು ಅವರ ಕಲಿಕೆಯನ್ನು ಉತ್ತಮಗೊಳಿಲು ಆನಂದ್ ಅವರು ಪರಿಚಯಿಸಿದ ಸೃಜನಶೀಲ ಬೋಧನಾ ವಿಧಾನಗಳನ್ನು ತಿಳಿಯಿರಿ. ತರಗತಿಯಲ್ಲಿ ಕರಡಿ ನೃತ್ಯ ಮಾಡುವವರಂತೆ ವೇಷ ಹಾಕಿದ, ತಮ್ಮ ವಿದ್ಯಾರ್ಥಿಗಳ ಜೊತೆಗಿನ ಸಂವಹನವನ್ನು ಸುಗಮಗೊಳಿಸಲು ಅವರ ಭಾಷಯನ್ನೇ ಕಲಿತ ಆನಂದ್ ಅವರ ಇಪ್ಪತ್ತು ವರ್ಷಗಳ ಪಯಣ ಸ್ಫೂರ್ತಿದಾಯಕವಾದದ್ದೇ.
ನಕ್ಷತ್ರಗಳು ಸಂಚಿಕೆ 16 | ರಾಜೇಶ್ವರಿ ಕಲ್ಮಣಿ, ಬೀದರ್ | ಉಮಾಶಂಕರ್ ಪೆರಿಯೋಡಿ
ಒಂದು ದಯನೀಯ ಸ್ಥಿತಿಯಲ್ಲಿಇದ್ದ ಶಾಲೆಯನ್ನು, ತಮ್ಮ ಕುಟುಂಬದ ನೆರವಿನೊಂದಿಗೆ, ಸಮುದಾಯವು ಹೆಮ್ಮೆ ಪಡುವಂತಹ ಶಾಲೆಯನ್ನಾಗಿಪರಿವರ್ತಿಸಿದ ರಾಜೇಶ್ವರಿ ಅವರೊಂದಿಗೆ ಸಂಭಾಷಣೆ.
ನಕ್ಷತ್ರಗಳು ಸಂಚಿಕೆ 15 | ಮಂಜುನಾಥ್ ಎಚ್.ಎನ್, ಹೊಮ್ಮಿನಾಳ | ಉಮಾಶಂಕರ್ ಪೆರಿಯೋಡಿ
ಮಂಜುನಾಥ್ ಅವರು, ಸಮರ್ಥ ಪ್ರಕ್ರಿಯೆಗಳು ಮತ್ತು ಮೂಲಸೌಕರ್ಯಗಳನ್ನು ಅನುಷ್ಠಾನಗೊಳಿಸುವ ಮೂಲಕ ಒಂದು ಸಾಧಾರಣ ಶಾಲೆಯನ್ನು ಬಹಳ ಕಡಿಮೆ ಅವಧಿಯಲ್ಲಿಯೇ ಅತ್ಯುತ್ತಮ ಕಾರ್ಯನಿರ್ವಹಣೆಯ ಶಾಲೆಯಾಗಿ ಹೇಗೆ ಪರಿವರ್ತಿಸಿದರು ಎಂದು ಕೇಳಿ.
ಅದಮ್ಯ ಶಿಕ್ಷಕರ ಗೆಲುವಿನ ಹಾದಿ
ಸವಾಲುಗಳನ್ನು ಮೀರಿ ಕಲಿಸುವುದೆಂದರೆ ಏನು ಎಂಬುದನ್ನು ಮರುವ್ಯಾಖ್ಯಾನಿಸಿದ ಗ್ರಾಮೀಣ ಕರ್ನಾಟಕದ 12 ಅಸಾಮಾನ್ಯ ಸರ್ಕಾರಿ ಶಾಲಾ ಶಿಕ್ಷಕರಿಗೆ ಹೃದಯಪೂರ್ವಕ ಗೌರವ ಸಲ್ಲಿಕೆ.
ನಕ್ಷತ್ರಗಳು ಸಂಚಿಕೆ 14 | ಮೈಲಾರಲಿಂಗ, ನಂದಿಹಳ್ಳಿ | ಉಮಾಶಂಕರ ಪೆರಿಯೋಡಿ
ಮೈಲಾರಲಿಂಗ ಅವರು, ತಾವು ಕೆಲಸ ಮಾಡುತ್ತಿದ್ದ ಶಾಲೆ ಇದ್ದ ಹಳ್ಳಿಯಲ್ಲೇ ವಾಸ ಮಾಡಲು ನಿರ್ಧರಿಸಿದ್ದರಿಂದ ಅವರಿಗೆ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಯಿತು. ಶಾಲೆಯ ಶಿಕ್ಷಕರು ಒಗ್ಗಟ್ಟಿನಿಂದ ಪ್ರಯತ್ನಿಸಿ ಶಾಲೆಗೆ ನೀರಿನ ಸಂಪರ್ಕ ತಂದರಲ್ಲದೇ, ಶಾಲೆಯಲ್ಲಿ ಒಂದು ಉತ್ತಮ ಗ್ರಂಥಾಲಯವನ್ನೂ ಪ್ರಾರಂಭಿಸಿದರು.
ನಕ್ಷತ್ರಗಳು ಸಂಚಿಕೆ 13 | ಆರತಿ, ದೇವಪುರ | ಉಮಾಶಂಕರ ಪೆರಿಯೋಡಿ
ಆರತಿಯವರು ತಮ್ಮ ಕಾರ್ಯಶ್ರದ್ಧೆ ಮತ್ತು ನವೀನ ವಿಧಾನಗಳಿಂದ ಒಂದು ಸಾಮಾನ್ಯ ಶಾಲೆಯನ್ನು, ಮಕ್ಕಳ ಏಳಿಗೆಗೆ ಕೊಡುಗೆ ನೀಡುವಂತಹ ಒಂದು ಉತ್ತಮ ಜೀವದುಂಬಿದ ಶಾಲೆಯನ್ನಾಗಿ ಪರಿವರ್ತಿಸಿದ ಕಥೆ.
ನಕ್ಷತ್ರಗಳು ಸಂಚಿಕೆ 12 | ನಿರ್ಮಲ ರೇವಣಗೋಳ, ಕಲಬುರಗಿ | ಉಮಾಶಂಕರ್ ಪೆರಿಯೋಡಿ
ನಿರ್ಮಲಾ ಅವರು ಕಲಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಕಡೇಚೆರ್ಲಾ ಗ್ರಾಮದಲ್ಲಿರುವ ಹರಿಜನವಾಡಾ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ. ಅವರ ನಾಯಕತ್ವದಲ್ಲಿ, ಹಿಂದೆ ನಿರ್ಲಕ್ಷ್ಯಕ್ಕೊಳಗಾಗಿದ್ದ ಶಾಲೆಯೊಂದು ಒಂದು ಉತ್ತಮ ಸಾಧನೆಯ, ಮತ್ತು ಗೌರವಯುತ ಸಂಸ್ಥೆಯಾಗಿ ಹೇಗೆ ಪರಿವರ್ತನೆಗೊಂಡಿತು ಎಂಬುದನ್ನು ಕೇಳೋಣ.
ನಕ್ಷತ್ರಗಳು ಸಂಚಿಕೆ 11 | ಸ್ಯಾಮುಯಲ್, ಖುರೇಷಿ ಮೊಹಲ್ಲಾ ಸ್ಕೂಲ್, ಸುರಪುರ್, ಯಾದಗಿರಿ | ಉಮಾಶಂಕರ ಪೆರಿಯೋಡಿ
ಮುಖ್ಯೋಪಾಧ್ಯಾಯರಾಗಿ ತಾವು ಆ ಶಾಲೆಗೆ ಬಂದಾಗ ಕೇವಲ 2 ವಿದ್ಯಾರ್ಥಿಗಳಿದ್ದ ಶಾಲೆಗೆ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬರುವಂತೆ ಮಾಡಲು ಸ್ಯಾಮುಯಲ್ ಅವರಿಗೆ ಹೇಗೆ ಸಾಧ್ಯವಾಯಿತು ಎಂಬುದರ ಸ್ಪೂರ್ತಿದಾಯಕ ಅನುಭವವನ್ನು ಈ ಸಂಚಿಕೆಯಲ್ಲಿ ಕೇಳಿರಿ. ಅವರ ಅಚಲ ನಿರ್ಧಾರವು ಖುರೇಷಿ ಮೊಹಲ್ಲಾ ಶಾಲೆಯನ್ನು ಈಗ ಕಲಿಕೆ ಮತ್ತು ಭರವಸೆಯ ಅಭಿವೃದ್ಧಿಶೀಲ ಸ್ಥಳವಾಗಿ ಪರಿವರ್ತಿಸಿದೆ.












